Sunday, May 3, 2020

ಅಕ್ಕನೇಂಬ ಮಹಾಸಾಧ್ವಿ

ಅಕ್ಕನೇಂಬ ಮಹಾಸಾಧ್ವಿ


ಮಹಾಸಾಧ್ವಿ
ಗಟ್ಟಿ ಮನಸ್ಸಿನ
ದೇವಿ, ತನ್ನ ಸಮುದಾಯದವರಿಂದಲೇ
ತೀರಸ್ಕರಗೊಂಡರು
ಶಿವನ ಮೆಚ್ಚಿನ ಸಾತ್ವಿಕ ಪತ್ನಿಯಾದಳು.


ರೋಮ,ರೋಮಗಳಲ್ಲಿ
ಶಿವಲಿಂಗನನೇ ತೋರಿಸಿದ
ಮಹಾಸಾಧ್ವಿಯ ಭಕ್ತಿ
ಅಖಂಡ ಲೋಕದ ಯಜಮಾನನಿಗೂ ತಿಳಿಯಲಿಲ್ಲ


ಚೆಂದವೋ ಚೆಂದ ನನ್ನ
ನಲ್ಲ ಚನ್ನಮಲ್ಲಿಕಾರ್ಜುನ
ಎಂದು ಭಕ್ತಿಯ ಒಲವಿನಾಳದಿ
ಕುಣಿದಾಡಿದ ದೇವಿಯ ಕಾಲುಗಳನ್ನೆ ಮುರಿದಿಟ್ಟರು.


ಉಡುತಡಿಯಿಂದ ಕಲ್ಯಾಣಕ್ಕೆ
ಬೆಳಕೇಂಬ ಬೆತ್ತಲೆಯ ಅಂಗಿಯ ತೊಟ್ಟು
ಕದಳಿಯ ಕರ್ಪೂರವಾಗಿ
ಪ್ರಜ್ವಾಲಿಸಿದಳು ದೇವಿ.


ಕಲ್ಯಾಣದಲ್ಲಿ ಕ್ರಾಂತಿಯ ಜ್ಯೋತಿ ಬೆಳಗಿಸಿದ
ಶಿವಶರಣೆ ದೇವಿ
ಹಿರಿಯ ಬಸವಣ್ಣನಿಗೂ
ಅಕ್ಕನೆಂಬ ಮಹಾದೇವಿಯೇ ಅಗಿಬಿಟ್ಟಳು.


ಚೆನ್ನ ಮಲ್ಲಿಕಾರ್ಜುನನ ಅಂತರಾಳದ
ಸಪ್ತಸ್ವರ ನುಡಿಸುವ ಶಾರದೆಯಾಗಿ
ತ್ರೀನೇತ್ರದಾರಿಯ ಶಿರದ ಮೇಲೆ ಪವಿತ್ರ ಗಂಗೆಯಾಗಿ
ತೊಳೆದಳು ಲೋಕದ ಡೊಂಕನ್ನ.


ಸ್ಫಟಿಕದಂತೆ ಸತ್ಯವಂತೆ
ಶ್ವೇತವರ್ಣದಂತೆ ಪವಿತ್ರಳು
ಚೆನ್ನನ ಚಿನ್ನದಂತ ಪತ್ನಿಯಾಗಿ
ಕದಳಿಯಲ್ಲಿ ಕರ್ಪೂರದಂತೆ ಕರಗಿಹೋದಳು.


                                         ಅನಿಲ್ ಕುಮಾರ್ ಹೆಚ್ ಜಿ.

No comments:

Post a Comment