Monday, September 28, 2020

ಮರಣಶಾಸನ ಕಾಯ್ದೆಗಳು

ಹಿಂದೆ ಇದ್ದ ಉಳುವವನೆ ಒಡೆಯ ಇಂದು ಉಳ್ಳವನೇ ಒಡೆಯ ಎಂಬಂತೆ ನಮ್ಮ ಸರ್ಕಾರಗಳು ಕೃಷಿ ಮತ್ತು ಭೂಸುಧಾರಣಾ ಕಾಯಿದೆಗಳನ್ನ ತರತೂರಿಯಲ್ಲಿ ಯಾವುದೇ ಚರ್ಚೆಗಳನ್ನ ಮಾಡದೆ ಸುಗ್ರಿವಾಜ್ಞೆಯ ಮೂಲಕ ತಂದಿದ್ದಾರೆ ಇವರ ಮೂಲ ಉದ್ದೇಶ ಎಲ್ಲವನ್ನೂ ಖಾಸಗೀಕರಣ ಮಾಡುವುದು. 2006 ರಲ್ಲಿ ಬಿಹಾರ ಸರ್ಕಾರ ತಂದ ಇಂತಹದೆ ಕಾಯಿದೆಯಿಂದ ಇಂದು ಅಲ್ಲಿನ ರೈತನ ಸ್ಥಿತಿ ಹೀನವಾಗಿದೆ ವೈಯಕ್ತಿಕವಾಗಿ ನಾನು ಈ ಕಾಯಿದೆಗಳನಷ್ಟೇ ಅಲ್ಲ ಹಿಂದೆ ಇದ್ದ ಸರ್ಕಾರಗಳು ತಂದ ಅನೇಕ ಕಾಯಿದೆಗಳಿಗೆ ವಿರೋಧವಿದೆ ಯಾಕೆಂದರೆ ಯಾವ ಸರ್ಕಾರಗಳೂ ರೈತನಿಗೆ ಕನಿಷ್ಟಪಕ್ಷ ಕನಿಷ್ಟಬೆಂಬಲದ ಬಗ್ಗೆ ಏನೂ ಯೋಜನೆಗಳನ್ನ ತರದೆ ಇರುವುದಕ್ಕೆ. ವೈಯಕ್ತಿಕವಾಗಿ ನಾನೇಕೆ ಈ ಮಸೂದೆಗಳನ್ನ ಕಡ ಖಂಡಿತವಾಗಿ ವಿರೋಧಿಸುತ್ತೆನೆಂದರೆ....

* ಈ ಮಸೂದೆಗಳು ರೈತರಿಗೆಮರಣಶಾಸನ‌ವಾಗಲಿದ್ದು ಇದು ಎಪಿಎಂಸಿ ಮಾರುಕಟ್ಟೆಯನ್ನ ಸಂಪೂರ್ಣವಾಗಿ ದುರ್ಬಲಗೊಳಿಸುವ ಕೆಲಸಕ್ಕೆ ಬರೆದ ಮುನ್ನುಡಿಯಾಗಿದೆ.

*ಸರ್ಕಾರವೇ ಹೇಳುವ ಹಾಗೆ ದಲ್ಲಾಳಿಗಳಿಂದ ಆಗುತ್ತಿರುವ ಅನ್ಯಾಯವನ್ನ ಸರಿಪಡಿಸುವ ಉದ್ದೇಶದಿಂದ ಈ ಮಸೂದೆಗಳನ್ನ ತಂದಿರುವುದಾಗಿ ಹೇಳಿದ್ದಾರೆ ಇದು ಮೂರ್ಖತನ ಯಾಕೆಂದರೆ 1956ರ ಆಚೆಗೆ ಕೃಷಿಮಾರುಕಟ್ಟೆಗಳ ಮೇಲೆ ಸರ್ಕಾರಗಳ ಯಾವುದೇ ನಿಯಂತ್ರಣವಿರಲಿಲ್ಲ ಹಾಗಾಗಿ ಅಲ್ಲಿನ‌ ಮೋಸಗಳನ್ನರಿತೇ 1956ರಲ್ಲಿ ಕರ್ನಾಟಕ ಎಪಿಎಂಸಿ ಕಾಯಿದೆ ಜಾರಿಗೆ ತಂದು ವರ್ತಕರನ್ನ ನಿಯಂತ್ರಿಸುತ್ತ ರೈತರೂಗಳು ತಾವು ಬೆಳೆದ ಬೆಳೆಯನ್ನ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಟ ಮಾಡುತ್ತಿದ್ದಾರೆ.

*ಆದರೆ ಹೊಸ ಮಸೂದೆಗಳ ಅನ್ವಯ ರೈತರ ಉತ್ಪನ್ನಗಳನ್ನ ಮಾರಾಟ ಮಾಡಲು ರೈತ ಮಾರುಕಟ್ಟೆಗೆ ಹೋಗಬೇಕೆಂದಿಲ್ಲ ಬದಲಾಗಿ ವರ್ತಕರೇ ಮನೆ ಬಾಗಿಲಿಗೆ ಬಂದು ಖರೀಸುವ ವ್ಯವಸ್ಥೆ ಮಾಡುವುದು  ರೀ ಸ್ವಾಮಿ ಅಲ್ಲಿಗೆ ಬರುವುದೇ ಈ reliance, Tata, More, ಅಂತಹ ಸೂಪರ್ ಮಾರ್ಕೆಟ್ಗಳು ಅಲ್ಲಿಗೆ ಬಂದು  ಅವರೂ ಕಂಡಿತ ರೈತನಿಗೆ ಓಳ್ಳೆಯ ಬೆಲೆಗೆ ಖರೀದಿಯನ್ನಂತೂ ಮಾಡುವುದಿಲ್ಲ ಕಾರಣ ಅವರುಗಳ ಮೂಲ ಉದ್ದಯ "ಲಾಭ" ಮಾತ್ರ ಅಂದರೆ   ಈ ಸರ್ಕಾರ ತನ್ನ ಸ್ನೇಹಿತರಾದ ಬಂಡವಾಳಶಾಹಿಗಳಿಗೆ ಮತ್ತು ಕಾರ್ಪೊರೇಟ್ ಜಗತ್ತಿಗೆ ಸಹಾಯ ಮಾಡವುದಷ್ಟೇ ಹೊರತೂ ರೈತನಿಗೆ ಇದರಿಂದ ಯಾವುದೆ ಉಪಯೋಗವಿಲ್ಲ ಕಾರಣವಿಷ್ಟೇ ನನ್ನ ಸ್ನೇಹಿತರಿಗೆ ಒಂದು ಮಾತು ನೆನಪಿಸುತ್ತೆನೆ *Karl Marx once said " If u decide to hang the capitalist, a capitalist will sell u the rope" ಈ  ಮಾತು ಇಷ್ಟು ಬೇಗ ಮರೆತರೆ ಹೇಗೆ.

*ಈ ಖಾಸಗೀಕರಣದಿಂದ ಸಾಮಾನ್ಯಜನರಿಗೆ ಯಾವ ರೀತಿಯ ಸಹಾಯವಿದೆ ಹೇಳಿ ಯೋಚಿಸುವುದಕ್ಕೂ ಸಾದ್ಯವಿಲ್ಲ ಯಾಕೆಂದರೆ ಉದಾಹರಣೆಗೆ: ಈ ರಸ್ತೆ ನಿಗಮಗಳನ್ನೆಲ್ಲ ಈ ಹಿಂದೆಯೇ ಖಾಸಗಿಯವರಿಗೆ ಒಪ್ಪಿಸಿರುವುದರಿಂದ ನಮಗೆನೂ ಲಾಭ ಜನರಿಗೆ ಟೋಲ್ಗೇಟ್ಗಳಲ್ಲಿ ಅಗುತ್ತಿರುವ ದಬ್ಬಾಳಿಕೆ ಕಾಣುವುದಿಲ್ಲವೇ ಮಜಾ ಅಂದ್ರೆ ಸರ್ಕಾರಿ ಬಸ್ಸುಗಳು ಕೂಡ ದುಡ್ಡುಕೊಟ್ಟಿ ಮುಂದೆ ಹೋಗ ಬೇಕು ದಟ್ ಮೀನ್ಸ್ ವಿ ಆರ್ ಅಂಡರ್ ಟ್ರಬಲ್ ಅಂತ.

* ಈ ಮಸೂದೆಗಳನ್ನ ಸುಗ್ರೀವಾಜ್ಞನೆಯ ಮೂಲಕ ತರಲು ಹೊರಟಿರುವುದು ಉತ್ತರದ ಮಂದಿಗಳ ಕೈಗೊಂಬೆಯಾಗಿರುವುದರಿಂದ ಅಂದರೆ ಕೇಂದ್ರದ ಒಬ್ಬ ಮಂತ್ರಿ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರಬರೆದು ಆದಷ್ಟೂ ಬೇಗ ಈ ಮಸೂದೆಗಳನ್ನ ಜಾರಿಗೆ ತಂದು ವರದಿ ಒಪ್ಪಿಸುವಂತೆ ಹೇಳಿರುವುದಕ್ಕಾಗಿಯೇ ನಮ್ಮ ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಯಾವುದೇ ಚರ್ಚೆಇಲ್ಲದೆ ಮಸೂದೆಗಳನ್ನ ಜಾರಿಗೆ ತಂದು ರೈತರಿಗೆ ಮೋಸ ಮಾಡಿ ಪಟ್ಟಬದ್ದಹಿತಸಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ.

*ಇದಕ್ಕೆ ಪೂರಕವಾಗಿ ಸರ್ಕಾರವೂ ಭೂ ಸುಧಾರಣೆ ಮಸೂದೆ, ಇದನ್ನೂ ಕೂಡ ಯಾವುದೇ ಚರ್ಚೆಇಲ್ಲದೆ ಜಾರಿಗೆ ತಂದಿರುವುದು. ಒಂದು ಘಟನೆಯನ್ನ ನೆನಪಿಸುವುದಕ್ಕೆ ಇಷ್ಟ ಪಡುತ್ತೆನೆ ಹಿಂದೆ ಮನಮೋಹನ್ ಸಿಂಗ್ ರವರೂ ಪ್ರಧಾನಿಗಳಾಗಿದ್ದಾಗ ಬಾಲಿವುಡ್ನ ಖ್ಯಾತ ನಟನೊಬ್ಬ ಬರೋಬ್ಬರಿ ಸುಮಾರು 250 ಕ್ಕೂ ಹೆಚ್ಚು ಎಕ್ಕರೆಯ ಕೃಷಿಭೂಮಿಯನ್ನ ಖರೀದಿ ಮಾಡಿದ್ದ ಆದರೆ ಮುಂದೆ ಘನವೆತ್ತ ನ್ಯಾಯಾಲಯ ಅಷ್ಟು ಭೂಮಿಯನ್ನ ವಶಕ್ಕೆ ಪಡೆಯಿತು. ಆದರೆ ಇಂದು ಈ ಹೊಸ ಕಾಯ್ದೆಯ ಅನ್ವಯ ಇಂತಹವರೂ ಮತ್ತೆ ಭೂಮಿ ಕೊಂಡುಕೊಳ್ಳಲ್ಲೂ ಶುರು ಮಾಡುತ್ತಾರೆ ಕೊಂಡ ಭೂಮಿಯಲ್ಲೇನೂ ಅವರು ಆಹಾರಬೆಳೆಗಳನ್ನ ಬೆಳೆಯುತ್ತಾರೆಯೇ ಸಾದ್ಯನೆ ಇಲ್ಲ ಅಲ್ಲಿ ಮತ್ತೆ‌ ಕಾಂಕ್ರೀಟ್ ಗೋಡೆಗಳೆ ಏಳುವುದು. ಮೊದಲೆ ನಮ್ಮ ರೈತರುಗಳು ಆಹಾರಬೆಳೆಗಳನ್ನ ಬೆಳೆಯೋದನ್ನ ಕಡಿಮೆ ಮಾಡಿದ್ದಾರೆ ಇನ್ನೂ ಈ ಕಾಯ್ದೆಗಳಿಂದ ಹಣದ ಆಮಿಷಕ್ಕೆ ಬಲಿಯಾಗಿ ಇದ್ದ ಭೂಮಿಯನ್ನ ಮಾರಿಕೊಂಡು ಬೀದಿಗೆ ಬಿಳುತ್ತಾರಷ್ಟೆ ಯಾಕೆಂದರೆ ಈ ಕಾಯ್ದೆ ನೇರವಾಗಿ  ಶೇಕಡಾ85%  ರೈತರಿಗೆ ತೊಂದರೆಯಾಗಲಿದೆ. ಒಂದು ಉದಾಹರಣೆ  ಹೇಳುತ್ತೆನೆ ಬಿ ಸುರೇಶ್ ರವರ "ಪುಟ್ಟಕ್ಕನ ಹೈವೆ" ಸಿನಿಮಾದಲ್ಲಿ  ಮಂಡ್ಯರಮೇಶ್ ರವರೂ ಒಬ್ಬ ರೈತನಾಗಿ ಕಾಣಿಸಿಕೊಂಡಿದ್ದಾರೆ ಅದರಲ್ಲಿ ಅವರ ಬಳಿ ಇದ್ದ ಕನಿಷ್ಠ ಭೂಮಿಯನ್ನ ಹಣದ ಆಸೆಗೆ ಮಾರಿಕೊಂಡು ಒಂದೆರಡು ವರ್ಷ ಸುಖವಾಗಿದ್ದು ತದನಂತರ ಹಣವಿಲ್ಲದೆ ಬಿದಿಗೆ ಬಂದು ಬಿಳುತ್ತಾರೆ ಇದೇ ಪರಿಸ್ಥಿತಿ ಈ ಕಾಯ್ದೆಗಳ ಮೂಲಕ ನಮ್ಮ ರೈತರಿಗೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

*ಇನ್ನೊಂದು ಬಹುಮುಖ್ಯವಾಗಿ ಕೇಂದ್ರ ಸರ್ಕಾರ ತಂದಿರುವ ಕಾಯಿದೆ "ಅಗತ್ಯವಸ್ತುಗಳ ತಿದ್ದುಪಡಿ-2020 ಮತ್ತು ಬೆಲೆ ಭರವಸೆ ಕಾಯಿದೆ ಅಂದರೆ ಇನ್ನೂ ಮುಂದೆ ಸರ್ಕಾರ ಕೃಷಿ ಉತ್ಪನ್ನಗಳನ್ನ ಬೆಂಬಲಬೆಲೆಗೆ ಖರೀದಿ ಮಾಡುವುದಿಲ್ಲ ಇದರ ಪರಿಣಾಮ " Food Corporation of India" ಸಂಸ್ಥೆಇರುವುದಿಲ್ಲ ಅಂದರೆ ಇನ್ನೂ ಮುಂದೆ ಬಡಜನರಿಗೆ ನ್ಯಾಯಬೆಲೆ ಅಂಗಡಿಯಿಂದ ನೀಡುತ್ತಿದ್ದ ರೇಷನ್ ಕೂಡ ಹಂತಹಂತವಾಗಿ ನಿಲ್ಲಿಸುವುದು ಇದರ ಮುಖ್ಯು ಉದ್ದೇಶವಾಗಿದೆಯೇ ಹೊರತು ಈ ಯಾವುದೇ ಕಾಯಿದೆಗಳಿಂದ ಯಾರಿಗೂ ಉಪಯೋಗವಿಲ್ಲ ಬದಲಾಗಿ ಇದು ಬಂಡವಾಳಶಾಹಿಗಳ, ಕಾರ್ಪೊರೇಟ್ ವ್ಯಕ್ತಿಗಳಲ್ಲಿ ಮಂಧಹಾಸ ಬಂದಿರುವುದಂತೂ ಸ್ಪಷ್ಟವಾಗಿದೆ.

ನಮಸ್ಕಾರ.

ಅನಿಲ್ ಕುಮಾರ್ ಹೆಚ್ ಜಿ